ಮುತ್ತಿನಂಥ ಮಾತೊಂದ ಗೊತ್ತ ನಿಮಗೆ ?

ಕಾಲ ಕಳದಂತೆ ಚಿಕ್ಕವರು ದೊಡ್ಡವರಾಗುತ್ತಾ ಬರ್ತಾರೆ ಅದೇ ದೊಡ್ಡವರು ವ್ರುದ್ಯಾಪ್ಯ ಜೀವನಕ್ಕೆ ಕಾಲಿಡುತ್ತಿರುತ್ತಾರೆ. ಸಮಯ ನನಗು ನಿಮಗೂ ಎಲ್ಲರಿಗು ಒಂದೇ ಆದರೆ ನಮ್ಮ ನಮ್ಮ ವಾತಾವರಣ ಹಾಗು ಚಟುವಟಿಕೆಯ ಮೇಲೆ ನಮ್ಮ ಸಮಸ್ಯೆಗಳು , ಸಂಬಂಧಗಳು , ಸ್ನೇಹಿತರ ಜೊತೆಯಲಿ ಜೀವನ ಸಾಗುತ್ತಲಿರುತ್ತೆ.

                   ನನಗೆ ಮನೆ ಕಟ್ಟಿಸಬೇಕು, ಕಾರಲ್ಲಿ ಓಡಾಡಬೇಕು , ನನ್ನ ತಂಗಿ , ತಮ್ಮ ಅಣ್ಣನ ಮದುವೆ  ಮಾಡಬೇಕು ನಾನು ಕೂಡ ಮದುವೆ ಆಗಬೇಕು , ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲ, ತುಡಿತ , ಮಿಡಿತ ಎಲ್ಲವು ಇದೆ. ಕಾಲಾಯ ತಸ್ಮೈ ನಮಃ ..... ಯಾವಾಗ ಯಾರಿಗೆ ಹೇಗೆ ಸಮಯ ಕೂಡಿ ಬರುವುದೋ , ಅದ್ಯಾವ ಘಳಿಗೆಯಲಿ ಜೀವನಕ್ಕೆ ಒಂದೊಳ್ಳೆ ತಿರುವು  ಬರುವುದೋ  ಆಗಲೇ ಅವನ ಏಳಿಗೆ ಸಾಧ್ಯ ಅಲ್ಲವೇ. ಆ ಘಳಿಗೆ ಯಾವಾಗ ಬರುವುದೋ ಎನ್ನುವ ಭರವಸೆ ಯಲಿ ಮಾಡುವ ಕೆಲಸದಲ್ಲಿಯೇ ನಿರಂತರ ಕೃಷಿಯನ್ನ ತೊಡಗಿಸಿಕೊಂಡು ಜೀವನ ಸಾಗಿಸುತ್ತಿರುವೆನು.

                 ಹಣಕ್ಕೆ ಮಾರು ಹೋಗದಿರಿ , ಅನವಶ್ಯಕ ಹಣವನ್ನ ವೆಚ್ಚ ಮಾಡದಿರಿ .... ಕಲಿಯುಗದ ಕೇಸರಿ ದುಡ್ಡನ್ನು ಯಾವತ್ತು ಸುಲಭವಾಗಿ ನೋಡದಿರಿ ... ಮುತ್ತಿನಂಥ ಮಾತೊಂದ ಗೊತ್ತ ನಿಮಗೆ , ನಿಮ್ಮ ಜೀವನದಲ್ಲಿಯೂ ಸಹ ನೀವಂದುಕೊಂಡಂತೆ ನಡೆಯುವ ಕಾಲ ಬರಲಿದೆ.